
ಔರಾದ:-ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆಗಳಿಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು,ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವ ಕುರಿತು ಅರಿವು ಮೂಡಿಸಬೇಕಿದೆ ಎಂದು ಸಂತಪುರ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಜೇಶ್ವರಿ ಹೇಳಿದರು.
ತಾಲೂಕಿನ ರಕ್ಷಳ ಕೆ. ಗ್ರಾಮದಲ್ಲಿ ಮಾಹಾದೇವ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪೌಷ್ಠಿಕತೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಆಯೋಜಿಸಿರುವ ರಾಷ್ಟ್ರಿಯ ಪೋಷಣಾ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದ್ದು,
ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ತಾವು ಮತ್ತು ಮಕ್ಕಳ ಆರೋಗ್ಯದ ಕಾಳಜಿಗೆ ಮುಂದಾಗಬೇಕು ಎಂದರು.
ಇದಕ್ಕೂ ಮುನ್ನ ಗ್ರಾಪಂ ಅಧ್ಯಕ್ಷ ಶೋಭಾ ಜಾಮ್ಸ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಣ್ಣು-ಹಂಪಲು ನೀಡಿ ಅರಿಶೀಣ ಕುಂಕುಮ ಹಚ್ಚಿ ಸೀಮಂತ ಮತ್ತು ಅನ್ನಪ್ರಾಸನ ಕಾರ್ಯಕ್ರಮ ಮಾಡಲಾಯಿತು.
ಠಾಣಾಕೂಶನೂರ ವಲಯದ ಸುಮಾರು 29ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೇಯರು ಹಾಜರಿದ್ದರು. ವಲಯ ಮೇಲ್ವಿಚಾರಕಿ ಶೋಭಾ ರಾಠೋಡ್,ಪಿಡಿಓ ವಿಜಯಲಕ್ಷ್ಮಿ, ಶಿವಾಜಿ ಕಾಳೆ,ಸಿಐಟಿಯು,ಅಧ್ಯಕ್ಷರು ಪದ್ಮಾವತಿ,ಶಾಂತಮ್ಮಾ ನಾಗೂರೆ,ಮೇಗಾ ಹಿಪಳಗಾವಕರ್,ಸೌಂದರ್ಯ,
ಪಾರ್ವತಿ,ಸರಸ್ವತಿ,ವಿಮಲಾಬಾಯಿ, ಸೂರ್ಯಕಲಾ,ರೇಣುಕಾ,ಮಾಹಾದೇವಿ,ಸೋಭಾ,ಮೇನಿಕಾ,ರೂಪಾ,ಪ್ರಭಾವತಿ,ಅನೀತಾ,ಸರೋಜನಿ,ಮಂಜುಳಾ,ಕಸ್ತರಿ,ಕಮಲಾಬಾಯಿ,ಸುರೇಖಾ,
ಬಬೀತಾ,ತೆಜಮ್ಮಾ,ಅರುಣಾ,ಅಂಗನವಾಡಿ ಸಹಾ ಯಕಿಯರು,ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿ ಯರು ಉಪಸ್ಥಿತರಿದ್ದರು.