
ಔರಾದ:- ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ವನ್ನು ಔರಾದ ನ್ಯಾಯಾಲಯ ಆವರಣ ದಿಂದ ಔರಾದ ಪಟ್ಟಣದ ಬಸ್ ನಿಲ್ದಾಣದವರೆಗೆ ನಡಿಗೆ ಜಾಥವನ್ನು ಹಾಜಿ ಹುಸೇನ್ ಸಾಬ್ ಯಾದವಾಡ ಹಿರಿಯ ಸಿವಿಲ್ ನ್ಯಾಯಧೀಶರು ಕಾರ್ಯಕ್ರಮಕ್ಕೆ ಚ್ಯಾಲನೆ ನೀಡಿ ಮಾತನಾಡಿದ್ದರು
14 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಹೊಟೇಲ್, ಗ್ಯಾರೇಜ್, ಧಾಭಾ ಮತ್ತು ಸಣ್ಣ ಗುಡಿ ಕೈಗಾರಿಕೆಗಳಲ್ಲಿ ಕಂಡು ಬರುತ್ತಾರೆ ಅದಕ್ಕೆ ಅನೇಕ ಕಾರಣಗಳಿವೆ ಬಡತನ, ಕೌಟುಂಬಿಕ ಕಲಹ, ಮಕ್ಕಳಿಗೆ ಪೋಷಕರು ಇಲ್ಲದೆ ಇರುವುದು ಇತ್ಯಾದಿ, ಆದರೆ ನಾವು ಅವರಿಗೆ ಬಾಲಕಾರ್ಮಿಕ ಪದ್ಧತಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕೆಂದರು.
ಗುರುವಾರ ಕಾರ್ಮಿಕ ಇಲಾಖೆ ಔರಾದ,ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯವಾದಿಗಳ ಸಂಘ, ತಾಲ್ಲೂಕಾ ಆಡಳಿತ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಔರಾದ, ಇವರುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನವನ್ನು ಆಚರಣೆ ಮಾಡಿದ್ದರು.
ರಾಹುಲ್ ಕಾರ್ಮಿಕ ನಿರೀಕ್ಷರು, ಔರಾದ ವೃತ್ತ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು, ಬಾಲ & ಕಿಶೋರ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ರನ್ವಯ ಬಾಲ & ಕಿಶೋರ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ತಿಳಿಸಿದರು, ಒಂದು ವೇಳೆ ನೇಮಿಸಿಕೊಂಡಲ್ಲಿ ರೂ, 20,000 ರಿಂದ 50,000 ರವರೆಗೆ ದಂಡ ಮತ್ತು 6 ತಿಂಗಳಿಗೆ ಕಡಿಮೆ ಇಲ್ಲದೆ 2 ವರ್ಷದವರೆಗೆ ಜೈಲು ಶಿಕ್ಷೆ ಇರುವುದಾಗಿ ತಿಳಿಸಿದ್ದರು,
ಜಾಥಾದಲ್ಲಿ ಔರಾದ ಪಟ್ಟಣದ ವಿವಿಧ ಶಾಲಾ ಮಕ್ಕಳು ಪಾಲ್ಗೊಂಡು ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳದಂತೆ ವಿವಿಧ ಘೋಷಣೆಗಳಾದ “ದುಡಿಮೆ ಬೇಡ, ಶಿಕ್ಷಣ ಬೇಕು”, “ಮಕ್ಕಳನ್ನು ದುಡಿಸದಿರಿ ,ಶಾಲೆಗೆ ಕಳುಹಿಸಿ,“ನಿಲ್ಲೀಸಿ, ನಿಲ್ಲೀಸಿ, ಬಾಲ ಕಾರ್ಮಿಕ ಪದ್ದತಿ ನಿಲ್ಲೀಸಿ”ಎಂಬ ಇತರೆ ಘೋಷಣೆಗಳೊಂದಿಗೆ ನ್ಯಾಯಾಲಯ ಆವರಣದಿಂದ ಬಸ್ ನಿಲ್ದಾಣದವರೆಗೆ ನಡಿಗೆ ಜಾಥವನ್ನು ನೇರವೆರಿಸಿದರು.
ಈ ಜಾಥ ಕಾರ್ಯಕ್ರಮದಲ್ಲಿ
ಗೌರವಾನ್ವಿತ ವಿನಾಯಕ ವಾನಖಂಡೆ, ಸದಸ್ಯ ಕಾರ್ಯದರ್ಶಿಗಳು ತಾಲೂಕಾ ಕಾನೂನು ಸೇವಾ ಸಮಿತಿ,ಬಾಲಾಜಿ ಕಂಬಾರ ಅಧ್ಯಕ್ಷರು ತಾಲ್ಲೂಕಾ ವಕೀಲರ ಸಂಘ ಹಾಗೂ ಇನ್ನಿತರ ವಕೀಲರು ಔರಾದ ರವರು ಹಾಜರಿದ್ದರು. ಕಾರ್ಮಿಕ ಇಲಾಖೆಯ ಸಿಬ್ಬಂದಿಗಳಾದ ಶ್ರೀಧರ್, ರಘುನಾಥ, ವಿವಿಧ ವಲಯದ ಕಾರ್ಮಿಕರು, ಸುನೀಲ ಮಕ್ಕಳ ಸಹಾಯವಾಣಿ ಸಿಬ್ಬಂದಿ, ಮತ್ತು ಔರಾದ ಪಟ್ಟಣದ ವಿವಿಧ ಶಾಲೆಗಳಿಂದ ಶಾಲಾ ಮಕ್ಕಳು ಹಾಗೂ ಮುಖ್ಯೋಪಧ್ಯಾರು, ಹಣಮಂತರಾವ ಮುಕ್ತೆದಾರ, ಕೇದಾರೇಶ್ವರ ಪ್ರೌಢ ಶಾಲೆ, ಮುಖ್ಯೋಪಧ್ಯಾರು ಸುಭಾಷ ಸಾಕ್ರೆ ಮತ್ತು ಸಹ ಶಿಕ್ಷಕರು ಶ್ರೀಮತಿ ಇಂದಿರಾ ಗಾಂಧಿ ಪ್ರೌಢ ಶಾಲೆ, ಔರಾದ, ಸಹ ಶಿಕ್ಷಕರು ಆದರ್ಶ ವಿದ್ಯಾಲಯ ಔರಾದ ಹಾಗೂ ಇನ್ನಿತರ ಶಾಲಾ ಮಕ್ಕಳು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಡಿಗೆ ಜಾಥ ಕಾರ್ಯಕ್ರಮವನ್ನು ನೆರವೆರಿಸಿದರು.
ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸಹಕಾರದಿಂದ ಪೊಲೀಸ್ ಬಂದೊಬಸ್ತ ಆಯೋಜಿಸಲಾಗಿತ್ತು.