
ಬೀದರ್ ತಾಲೂಕಿನ ಚಿಟ್ಟಾ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಕಾಯಕ ಮಾಸಾಚರಣೆ
ಹಮ್ಮಿಕೊಳ್ಳಲಾಯಿತು .
ಗ್ರಾಮೀಣ ಭಾಗದ ಜನರು ನರೇಗಾಯಡಿ ಮಹಾನಗರಕ್ಕೆ ವಳಸೆ ಹೋಗದೆ ತಮ್ಮ ಊರಿನಲ್ಲಿ ಪಂಚಾಯತಿ ವತಿಯಿಂದ ಕೆಲಸ ಪಡೆದುಕೊಳ್ಳಬೇಕು ಹಾಗೂ 30% ವಿನಾಯಿತಿ ಇದ್ದಿದ್ದು ಆದ್ದರಿಂದ ವಿಶೇಷ ಚೇತನರು ಹಿರಿಯ ನಾಗರಿಕರಿಗೆ, ಮತ್ತು ಗರ್ಭಿಣಿಯರಿಗೆ ಭಾಗವಹಿಸಬೇಕೆಂದು ಎಂದು ಚಿಟ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಿ ಘಾಳೆ ತಿಳಿಸಿದರು..
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ, ಇನ್ಸೂರೆನ್ಸ್ ಗಳ ಕುರಿತು ಹಾಗೂ ನರೇಗಾ ಲಾಭದ ಕುರಿತು ಐಇಸಿ ಸಂಯೋಜಕರಾದ ಸತ್ಯಜೀತ ನೀಡೋದಕರ್ ಹಾಗೂ ನರೇಗಾ ಸಿಬ್ಬಂದಿಯಾದ ಪ್ರವೀಣ್ ಧರಿಯ ಮಾಹಿತಿ ನರೇಗಾ ಕೂಲಿ ಕಾರ್ಮಿಕರಿಗೆ ತಿಳಿಸಿದರು.
ಕೂಲಿ ಕಾರ್ಮಿಕರಿಂದ ಫಾರಂ.ನಂಬರ-6 ರಲ್ಲಿ 40 ಕೂಲಿ ಕಾರ್ಮಿಕರ ಕೆಲಸದ ಬೇಡಿಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ನರೇಗಾ ಸಿಬ್ಬಂದಿಗಳಾದ ಫಾಹಿಮ್ ಶೇಖ್, ಸುಧಾಕರ್, ದೀವೊನ್ ಹಾಗೂ ಗ್ರಾಮಸ್ಥರು ಇದ್ದರು.