September 8, 2025

ವರದಿ:-ಈರಣ್ಣಾ ಮೌರ್ಯ
ಶಹಾಪುರ:-ಬಹುದಿನಗಳ ಬೆಡಿಕೆಯಾಗಿದ್ದ ನಗರದ ಹಳೆ ಬಸ್ ನಿಲ್ದಾಣದ ಅವರಣದಲ್ಲಿ ಡಾ.ಬಿ,ಆರ್ ಅಂಬೇಡ್ಕರವರ ಪ್ರತಿಮೆ ಸ್ಥಾಪನೆ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದು, ರಾಜ್ಯ ಸಚಿವ ಸಂಪುಟದ ಮಂತ್ರಿಗಳು, ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿಗಳಾದ ಶರಣಬಸಪ್ಪಗೌಡ ದರ್ಶನಾಪುರವರ ಸತತ ಪ್ರಯತ್ನಗಳಿಂದ ಇಂದು ಸಂಪುಟದಲ್ಲಿ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ ನೀಡಲಾಯಿತು, ಸಚಿವರು ಅವಿರತ ಪರಿಶ್ರಮ ಮತ್ತು ದಲಿಪ ,ಪ್ರಗತಿಪರ , ಜನಪರ ,ಕನ್ನಡಪರ, ಸಾಮಾಜಿಕ ಸಾಮೂಹಿಕ ಸಂಘಟನೆಗಳ ಸಹಕಾರಗಳಿಂದ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರವರ ಪ್ರತಿಮೆ ಸ್ಥಾಪನೆಗೆ ಕಾರಣವಾಗಿ ಹಳೆ ಬಸ್ ನಿಲ್ದಾಣದ ಅವರಣದ ಡಾ, ಬಾಬಾಸಾಹೇಬರ ಮೈದಾನದಲ್ಲಿ ಸರ್ವರು ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಡಾ,ಶರಣು ಗದ್ದುಗೆ , ಸಣ್ಣ ನಿಂಗಣ್ಣ ನಾಯ್ಕೊಡಿ, ಗೌಡಪ್ಪಗೌಡ ಆಲ್ದಾಳ,ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ,ಶಾಂತಪ್ಪ ಗುತ್ತೆದಾರ, ಭೀಮಣ್ಣಶಾಖಾಪುರ್,ಹೋನಪ್ಪ ಗಂಗಾ ನಾಳ್, ಗಿರೆಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೆಗುಂದಿ, ಅಂಬ್ರೇಶ ವಿಬೂತಿಹಳ್ಳಿ,ನಾಗಣ್ಣ ಬಡಿಗೇರ, ಭೀಮರಾಯ ಹೊಸಮನಿ, ಶಿವಪುತ್ರ ಜವಳಿ, ಡಾ,ರವಿಂದ್ರನಾಥ ಹೋಸಮನಿ,ಶುಭಾಶ ತಳವಾರ,ಅಪ್ಪಣ್ಣ ದಶವಂತ್, ಮಾಪಣ್ಣ ಬಡಿಗೇರ್, ಶಿವುಕುಮಾರ ತಳವಾರ, ಮರೆಪ್ಪ ಪ್ಯಾಟಿ, ವಿಜಯಕುಮಾರ ಎದರಮನಿ,ಸೇಖರ ದೊರಿ,ಸಿದ್ದಣ್ಣ ತನಕೆದರ್, ಶಂಕರ್ ಸಿಂಗೆ, ಚಂದಪ್ಪ ಸಿತ್ನಿ, ಬಸವರಾಜ ನಾಟೆಕಾರ್, ಭೀಮರಾಯ ಸೈದಾಪುರ, ಸುರೇಂದ್ರ ಕರ ಕಳ್ಳಿ, ಮೌನೇಶ್ ನಾಟೆಕಾರ್, ರಾಯಪ್ಪ ಚಲುವಾದಿ, ವೆಂಕಟೇಶ್ ಬೋನರ್, ಗುರು ದೊಡ್ಡಮನಿ ಸೇರಿದಂತೆ ದಲಿಪತ ಮುಖಂಡರು, ಸಾಮಾಜಿಕ ಹೋರಾಟಗಾರರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771