September 8, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

ಔರಾದ:-ಕಾಲೇಜಿನ ಮೂಕ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗಿದ್ದು ಹೈ ಟೇಕ್ ಸಂಸ್ಥೆ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು ಎಂದು ಅರ್ ಆರ್ ಕೆ ಸಮಿತಿ ಅಧ್ಯಕ್ಷ ಪ್ರಫುಲ್ ಪಾಂಡೆ ಹೇಳಿದರು.

ನಗರದ ಅಮರೇಶ್ವರ ಪದವಿ ಕಾಲೇಜಿನಲ್ಲಿ ಮಾಜಿ ವಿಧ್ಯಾರ್ಥಿಗಳ ಸಂಘದ ಸಭೆಯಲ್ಲಿ ಮಾತನಾಡಿದ ಅವರು ನೂತನವಾಗಿ ಅಧಿಕಾರ ವಹಿಸಕೊಂಡ ನಂತ್ರ ಕಾಲೇಜಿಗೆ ಸಭಾಗಂಣ, ಕೊಠಡಿಗಳು, ಗ್ರಂಥಾಲಯ, ಉದ್ಯಾನ, ಶೌಚಾಲಯ ಹೀಗೆ ಹಲವು ಸೌಲಭ್ಯಗಳು ನೀಡಲು ಪ್ರಯತ್ನಿಸಿದ್ದೆನೆ ಮುಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ, ಹಾಗೂ ಡಿಪ್ಲೊಮಾ ಕೊರ್ಸಗಳು ಕೂಡ ಆರಂಭಿಸಲು ತಯ್ಯಾರಿ ಮಾಡಿಕೊಂಡಿದ್ಸು ಅದಕ್ಮಾಗಿ ಮೂಲ ಸೌಲಭ್ಯ ಒದಗಿಸಲು ಪ್ರಾಶಶ್ತ ನೀಡಲಾಗ್ತಿದೆ ಎಂದರು.

ಸಙಸ್ಥೆಯ ಕಾರ್ಯದರ್ಶಿ ಶರಣಬಸಪ್ಪ ದೇಶಮುಖ್ ಮಾತನಾಡಿ ಅಮರೇಶ್ವರ ಕಾಲೇಜು 5 ದಶಕಗಳ ಹಿಂದೆ ಕಾಶಿನಾಥರಾವ್ ಬೇಲೂರೆ ಅವರ ಶ್ರಮದಿಂದ ಆರಂಭವಾಗಿದೆ ಬಹಳಷ್ಟು ಕಷ್ಟಪಟ್ಟು ಸಂಸ್ಥೆ ಬೆಳೆದಿದೆ ಎಂದರು.

ನಿರ್ದೇಶಕರಾದ ರವೀಂದ್ರ ಮಿಸೆ ಅವರು ಮಾತನಾಡಿ ಈ ಭಾಗದಲ್ಲಿ ಬಡವರ ಪಾಲಿನ ಯುನಿವರ್ಸಿಟಿ ಅಮರೇಶ್ವರ ಕಾಲೇಜಿದೆ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡ್ದವರು ಸಾಕಷ್ಟು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.

ಮಾಜಿ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಅನೀಲಕುಮಾರ್ ದೇಶಮುಖ್, ಉಪಾಧ್ಯಕ್ಷ ಸುಧಾಕರ ಕೊಳ್ಳುರ್, ಪ್ರಾಚಾರ್ಯ ಡಾ.ಜಯದೇವಿ ತೇಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಶೋಕ ಶೆಂಬೆಳ್ಳಿ, ಅಶೋಕ ಶೆಂಬೆಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆಯಲ್ಲಿ ಹಳೆ ವಿಧ್ಯಾರ್ಥಿಗಳ ಸಂಘದಿಂದ ಅಮರೇಶ್ವರ ಕಾಲೇಜಿನಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸ್ಥೆಯ ಅಧ್ಯಕ್ಷ ಪ್ರಫುಲ್ ಪಾಂಡೆ ಅವರು ಉದ್ಘಾಟನೆ ಮಾಡಿದ್ರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771