June 19, 2025

ಔರಾದ್:ಧಮ್ಮಚಾರಿಕಾ ಕಾರ್ಯಕ್ರಮವನ್ನು ಬಾದಲಗಾಂವ ಗ್ರಾಮದ ಗಂಗಾರಾಮ ನರಸಿಂಗ ಅವರು ಒಂದು ತಿಂಗಳ ಬುದ್ಧ ಮತ್ತು ಅವರ ಧಮ್ಮ ಪುಸ್ತಕವನ್ನು  ಬುದ್ಧ ಧರ್ಮದ ನಿಯಮಮದಂತೆ ಪಠಣ ಮಾಡಿ ಧ್ಯಾನಮಗ್ನರಾದ ಪ್ರಯುಕ್ತ ಧಮ್ಮ ಚಾರಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಭಂತೆ ಭೋಧಿರತ್ನ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಎಲ್ಲಾ ಭಂತೆ ಮನೆ ಮನೆಗೆ ತೆರಳಿ ಭಿಕ್ಷೆಯನ್ನು ಸ್ವೀಕರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಂತೆ ಬೋಧಿರತ್ನ,ಬುದ್ದ ಕ್ರಿಸ್ತ ಪೂರ್ವ 563  ದಿಂದ 483 ಕ್ರಿ. ಪೂ. ಕಾಲಘಟ್ಟದಲ್ಲಿ ಗೌತಮ ಬುದ್ಧನು  ನೇಪಾಳದಲ್ಲಿ ಲುಂಬಿನಿಯಲ್ಲಿ ಜನಿಸಿದರು.  ಅವರು ಮಾನವ ಜೀವನದ ಸಂಪೂರ್ಣ ಜ್ಞಾನವನ್ನು ಪಡೆದರು. ಆದುದರಿಂದಲೇ ಆತನಿಗೆ ‘ಬುದ್ಧ’ ಎಂಬ ಹೆಸರು ಬಂದಿತು. ಮಾನವ ಜೀವನದಲ್ಲಿ ದುಃಖ ಮತ್ತು ಸಂಕಟ ಏಕೆ ಎಂದು ಅವರು ತಿಳಿದುಕೊಳ್ಳಲು ಬಯಸಿದ್ದರು. ಈ ಪ್ರಶ್ನೆಗೆ ಉತ್ತರದ ಅನ್ವೇಷಣೆಯಲ್ಲಿ ಬುದ್ಧ ತನ್ನ ಮನೆ ಮತ್ತು ಎಲ್ಲಾ ಸೌಕರ್ಯಗಳನ್ನು ತೊರೆದನು.

ವೈಶಾಖ ಪೂರ್ಣಿಮೆಯಂದು ಅವರು ಬಿಹಾರದ ಗಯಾ ಬಳಿಯ ಉರುವೇಲಾ ಎಂಬಲ್ಲಿನ ಮರವೊಂದರ ಕೆಳಗೆ ಆಳವಾದ ಧ್ಯಾನದಲ್ಲಿ ಕುಳಿತಿದ್ದರು. ಆಗ ಅವರು ‘ಬೋಧಿ’ – ಜ್ಞಾನೋದಯ ಅಥವಾ ಅತ್ಯುನ್ನತ ಜ್ಞಾನವನ್ನು ಪಡೆದರು. ಈ ಮರವನ್ನು ಈಗ ‘ಬೋಧಿ’ ಮರ (ಬೋಧಿವೃಕ್ಷ) ಎಂದು ಕರೆಯಲಾಗುತ್ತದೆ.

ಅವರು ತಮ್ಮ ಮೊದಲ ಧರ್ಮೋಪದೇಶವನ್ನು ವಾರಣಾಸಿ ಬಳಿಯ ಸಾರನಾಥದಲ್ಲಿ ಮಾಡಿದರು. ಮೊದಲ ಧರ್ಮೋಪದೇಶದಲ್ಲಿ ಅವರ ಬೋಧನೆಗಳನ್ನು ಧಮ್ಮ ಎಂದು ಕರೆಯಲಾಗುತ್ತದೆ. ಅವರು ಈ ಧರ್ಮೋಪದೇಶದಲ್ಲಿ ಧಮ್ಮದ ಚಕ್ರವನ್ನು ಚಾಲನೆ ಮಾಡಿದರು.ಮತ್ತು ಸಂಸ್ಕೃತದಲ್ಲಿ ಧರ್ಮ-ಚಕ್ರಪ್ರವರ್ತನ್ ಎಂದು ಕರೆಯಲಾಗುತ್ತದೆ.

ಪ್ರಾಚೀನ ಭಾರತದಲ್ಲಿನ  ಅವರು ಧಮ್ಮವನ್ನು ಬೋಧಿಸಲು ಸುಮಾರು ನಲವತ್ತೈದು ವರ್ಷಗಳ ಕಾಲ ಕಾಲ್ನಡಿಗೆಯಲ್ಲಿ (ಚಾರಿಕಾ) ಪ್ರಯಾಣಿಸಿದರು. ಅವರು ಜನರ ಭಾಷೆಯಾದ ಪಾಲಿಯಲ್ಲಿ ಬೋಧಿಸಿದರು. ಬೌದ್ಧ ಧರ್ಮದಲ್ಲಿ, ಬುದ್ಧ, ಧಮ್ಮ ಮತ್ತು ಸಂಘದಲ್ಲಿ ಆಶ್ರಯ ಪಡೆಯುವುದು ಮುಖ್ಯವಾಗಿದೆ. ತ್ರಿಸರಣ ಪಂಚ ಶೀಲವು ಜೀವನ ಅರ್ಥಮಯವಾಗಿಸುತ್ತದೆ ಎಂದು ನುಡಿದರು.

ಕಾರ್ಯಕ್ರಮವನ್ನು  ಸಿಧಾರ್ಥ್ ಜ್ನ್ಯಾನದೇವ್ ಭೋಸಲೇ, ಸೂರ್ಯಕಾಂತ್ ಕಾಲೆೇಕರ್, ಪಂಡರಿ ಹೊಕ್ರಾಣ, ಭೀಮರಾವ್ ಮುಂಗನಾಳ, ಗಣಪತಿ ರಾವ್ ಸಿಂಗೆ ಔರಾದ್, ನಿರ್ವಹಿಸಿದರು.

 ಕಾರ್ಯಕ್ರಮದಲ್ಲಿ ಬಾದಲಗಾವ್ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು  ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಗ್ರಾಮದ ನಾಗುರಾವ್,ತ್ರಿಯಂಬಕ ಕಾಂಬಳೆ,ಜ್ಞಾನು ಭಾಸ್ಕರೆ, ಗೌತಮ್ ಸಿಂಧೆ, ಸಂದೀಪ್ ಕಾಂಬಳೆ, ಸಚಿನ್ ಕಾಂಬ್ಳೆ, ಪುಂಡಲೀಕ್ ಭಾಸ್ಕರೆ, ದಲಿತ್ ಸೂರ್ಯವಂಶಿ ಹಾಜರಿದ್ದರು.ಗೋವಿಂದ್ ಬೋಸ್ಲೆ ಪ್ರಸ್ತಾವಿಕ ಮಾತನಾಡಿದರು.ಪಂಡರಿ ಕಸ್ತೂರೇ ನಿರೂಪಿಸಿದರು.ಸಿದ್ದಾರ್ಥ್ ಭೋಸ್ಲೆ ವಂದಿಸಿದರು.

 

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771